“ಹಿರಿಯ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತ ನಿಧನ

ಬೆಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತರು ಶನಿವಾರ ನಿಧನರಾದರು.ನೆಬ್ಬೂರರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಶ್ರೀಮಂತ ಕಂಠದಿಂದ ಯಕ್ಷಗಾನದ ಕಲಾ ವ್ಯವಸಾಯದಲ್ಲಿ ಭಾಗವತರಾಗಿ ಪ್ರಸಿದ್ಧರಾದವರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿಯ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ್ದಾರೆ.ದೇಶ, ವಿದೇಶಗಳಲ್ಲಿಯೂ ನೆಬ್ಬೂರರ ಸ್ವರಮಾಧುರ್ಯ ಕಲಾಸಹೃದಯರ ಕಿವಿಗಳಲ್ಲಿ ಅನುರಣಿಸಿದೆ.

courtsey:prajavani.net

https://www.prajavani.net/stories/stateregional/yakshagana-artist-death-635783.html

Leave a Comment

Your email address will not be published. Required fields are marked *

Scroll to Top